ಹೊಸ ವರ್‍ಷವು ಬರಲಿ

ಹೊಸ ವರ್‍ಷವು ಬರಲಿ
ದಿನ ದಿನವೂ ಪ್ರತಿ ಕ್ಷಣವೂ
ಹೊಸತನವು ಬಾಳಿಗೆ
ಹೊಸ ಚೈತನ್ಯವ ತರಲಿ||

ಹರುಷದಾ ಮೊಗ ಚೆಲ್ಲಿ
ವರುಷದ ಕಳೆ ಚಿಗುರಿ
ಮುಂಗಾರಂಚಿನ ಇಬ್ಬನಿ ಹನಿ
ಪುಟಿದೇಳುವ ಕಾಮನೆ ಹೂವಾಗಲಿ||

ಚಂದ್ರಿಕೆಯಾ ಸಖಿ ಹಸೆಮಣೆಯ
ಕಾಂತೆಯರು ಮುತ್ತಿನಾರತಿ ಬೆಳಗಿ
ಅಂಬರಕೆ ಚಪ್ಪರ ಕಟ್ಟಿ
ಸ್ವರ್‍ಗ ಆಸೀಮ ಸಪ್ತಪದಿ ಸಾಗಲಿ||

ಸೊಬಗಿನಾ ಬಣ್ಣ ಹೊನ್ನರಂಗಿನಲಿ
ರಂಗಾದ ಹೂತೋಟ ನೈದಿಲೆ
ಕೋಗಿಲೆ ಕುಹೂ ಕುಹೂ ಜೀವನ ಗಾನ
ರಾಗ ತಾಳ ಮೋಹಕವೂ ಇಂಪಾಗಲಿ||

ಮೂಡಲೀ ಹೊಸ ವರುಷ
ಜೀವ ಜೀವದುಸಿರ ಪ್ರತಿಕ್ಷಣ
ಮಾನವತೆಯ ಮನ ಪಾವಿತ್ರತೆ
ತ್ಯಾಗ ಶಾಂತಿ ಸಹನೆ ಮಂದಹಾಸ
ಜಗದಭಿಮಾನ ಮೂಡಿ ಐಕ್ಯವಾಗಲಿ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅವಶ್ಯಕತೆ ಮತ್ತು ಕಾನೂನು
Next post ನಿಯಮ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

cheap jordans|wholesale air max|wholesale jordans|wholesale jewelry|wholesale jerseys